Current Date 28 Jul, 2026

''ರೇಣುಕಾಸ್ವಾಮಿಯಂಥಹ ಗಂಡ ಯಾಕೆ ಬೇಕು'' - ತನಿಷಾ 'ಬೆಂಕಿ' ಮಾತು...!

ತಮ್ಮ ನೇರ ನಡೆ ನುಡಿಗಳಿಂದ ಹೆಸರುವಾಸಿಯಾದವರು ತನಿಷಾ ಕುಪ್ಪಂಡ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೊನೆಯ ಹಂತದವರೆಗೆ ತಲುಪಿ, ಬೆಂಕಿ ಎಂಬ ಬಿರುದಿನೊಂದಿಗೆ ಮರಳಿದ ತನಿಷಾ ಕುಪ್ಪಂಡಗೆ ಕನ್ನಡ ಚಿತ್ರರಂಗದ ಕುಖ್ಯಾತ ನಾಯಕ ದರ್ಶನ್ ಅಂದ್ರೆ ಪ್ರಾಣ. ಎಷ್ಟರ ಮಟ್ಟಿಗೆ ಅಂದರೆ, ಸದ್ಯಕ್ಕೆ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಇವರ ಕನಸಿನಲ್ಲಿ ಎಲ್ಲ ಬಂದು ಕಾಡ್ತಾರೆ. ಖುದ್ದು ತನಿಷಾ ಅವರೇ ಹಿಂದೆ ಸಂದರ್ಶನವೊಂದರಲ್ಲಿ ಈ ಮಾತು ಹೇಳಿದ್ದರು. ಇಂಥ ತನಿಷಾ ಕುಪ್ಪಂಡ ಈಗ ದರ್ಶನ್ ಪ್ರಕರಣದ ಕುರಿತು ಮಾತನಾಡಿದ್ದಾರೆ. ಸಹಜವಾಗಿ ದರ್ಶನ್ ಅವರ ಪರ ವಕಾಲತ್ತು ವಹಿಸಿಯೇ ತನಿಷಾ ಮಾತನಾಡಿದ್ದಾರೆ.

ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ತನಿಷಾ ಕುಪ್ಪಂಡ, ದರ್ಶನ್ ಸರ್.. ನನ್ನ ಪಾಲಿಗೆ ಮೊದಲಿಂದ ಸ್ಫೂರ್ತಿಯ ಚಿಲುಮೆ ಎಂದಿದ್ದಾರೆ. ದರ್ಶನ್ ಸರ್ ಜೈಲು ಸೇರಿದ ಕಾರಣಕ್ಕೆ ತುಂಬಾ ದುಃಖ ಆಗಿದೆ ಅಂದಿದ್ದಾರೆ. ಇನ್ನೂ ನಮ್ಮ ಸುತ್ತ ಮುತ್ತ ಹಲವು ಘಟನೆ ನಡೆಯುತ್ತವೆ. ಆ ಪೈಕಿ ಕೇವಲ ಒಳ್ಳೇ ಘಟನೆಯನ್ನ ಅಷ್ಟೇ ನಾವು ನೆನಪಿನಲ್ಲಿಡಬೇಕು ಎಂದಿದ್ದಾರೆ. ಕಹಿ ಘಟನೆಗಳನ್ನು ಜೀರ್ಣ ಮಾಡ್ಕೋಬೇಕು ಇಲ್ಲ ಬಿಟ್ಟು ಮುಂದೆ ಹೋಗಬೇಕು. ಸಾಧ್ಯವಾದರೆ ಎಲ್ಲರಿಗೂ ಎಲ್ಲದಕ್ಕೂ ನ್ಯಾಯ ಸಿಗಲಿ. ಯಾರು ಕಷ್ಟದಲ್ಲಿ ಇದ್ದಾರೆ ಅವರು ಕಷ್ಟ ಮುಗಿದು ಹೊರಗೆ ಬರಲಿ ಎಂದಿದ್ದಾರೆ.